ಎಲೆ ಮಾನವಾ

ಎಲೆ ಮಾನವ ನವಮಾನವ ಆಥುನಿಕತೆ ದಾನವಾ
ಎತ್ತ ನಿನ್ನ ಪಯಣ ಮತಿಯ ಮನವ ಮರೆತ ಮಾನವಾ ||೧||

ದೇವನೊಂದು ಸೃಷ್ಟಿಸಿರಲು ನೀನೆ ಬೇರೆ ಗೈಯುವೇ
ನಿನ್ನ ನೀನು ಕಾಯ್ದುಕೊಳಲು ನಿನಗೆ ನೀನೆ ಸಾಯುವೇ ||೨||

ನಡೆದು ದುಡಿದು ತಿನ್ನು ಬಾಳೊ ಕೈಕಾಲ್ಗಳ ಬಳಸುತ
ಎಂದು ದೇವ ಸೃಷ್ಟಿಸಿರಲು ಸುಖಕೆ ನೀನು ಎಳಸುತ ||೩||

ಮೈಗಳ್ಳನೆ ದುಡಿಮೆ ಉಳಿಸಿ ದೈವದ್ರೋಹ ಗೈಯುವೆ
ಯಂತ್ರಗಳಲಿ ಸುಲಭತೆಯಲಿ ಸಂತಸವನು ಅರಸುವೆ ||೪||

ಪ್ರಕೃತಿ ಮಾತೆ ಇರುವ ರೀತಿಯಲ್ಲಿ ನೀನು ಬಿಡದಿಹೆ
ವಿಕೃತಿ ಮಾಡಿ ಶೋಧಗೈವ ಸೋಗಿನಲ್ಲಿ ಕೆಡುತಿಹೆ ||೫||

ಅಡವಿ ಬಿಟ್ಟು ಗವಿಯ ಬಿಟ್ಟು ಪ್ರಕೃತಿಯಿಂದ ದೂರ ಬಂದೆ
ನಗರಗಳಲಿ ಹೊಸತು ಕಂಡು ಪ್ರಕೃತಿಯನ್ನೆ ದೂರಿ ನಿಂದೆ ||೬||

ಸಾಯಲಂಜಿ ಮೃತ್ಯುವನ್ನು ಗೆಲ್ಲಲೆಂದು ಯತ್ನಿಸಿರುವೆ
ಸಾವಕಾಶವಾಗಿ ನಿನ್ನ ಗೋರಿ ನೀನೆ ಕಟ್ಟುತಿರುವೆ ||೭||

ವಿಜ್ಞಾನದ ಕತ್ತಿಯನ್ನು ಹಿಡಿದು ಬಾಳ ಕೆತ್ತುತಿರುವೆ
ಒಳ ಸತ್ಯವ ಕಾಣಲೆಂದು ಸೀರೆಯನ್ನೆ ಕಿತ್ತುತಿರುವೆ ||೮||

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪೈಗಂಬರರ ಮಾನವೀಯ ಅಂತಃಕರಣ
Next post ಮಾತಿನ ಮಲ್ಲಣಿ

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

cheap jordans|wholesale air max|wholesale jordans|wholesale jewelry|wholesale jerseys